Tuesday, 3 April 2012

ಬೇಲುರ್- ಮನದಾಳದ ಮಾತು


ನನಗ  ಬೇಲುರ್ -ಹಳೆಬಿಡ್  ನೋಡ್  ಬೇಕು  ಅಂತ  ಬಹಳ  ಮನಸಿನ್ಯಾಗ  ಇತ್ತು . ಪುಸ್ತಕದಾಗ  ಎಲ್ಲ  ಓದ್ತಿದ್ದೆ . ಮೊನ್ನೆ  ನನ್ನ  ದೋಸ್ತ್  ವಿನಾಯಕನ  ಜೊತಿ  ಅದು  ಘಡಾಸಿತು . ಅದರಾಗ  ಬೇಲುರ್  ಅಂತು  ಕೇಳಬ್ಯಾಡ್ರಿ  ಬಹಳ  ಛಂದ  ಅದ . ಮನಸ್ಸಿಗೆ  ಬಹಳ  ಸಮಾಧಾನ  ಸಿಕ್ತು . ಏನ್  ಕೆತ್ತನಾ ಮಾಡ್ಯಾರ್ರಿ ... ಅರ್ರೆರೆರೆ ... ಎರಡ  ಕಣ್ಣ  ಸಾಕಾಗಾಂಗಿಲ್ರೀ   ನೋಡ್ಲಿಕ್ಕೆ . ಅಲ್ಲಾ  ಆಗಿನ  ಕಾಲದ  ರಾಜರಿಗೆ  ಹಿಂತವೆಲ್ಲಾ  ಹೆಂಗ್  ತಲಿಗೆ  ಬರತಿದ್ದು  ಅಂತೇನಿ . ಅದು  ಅಜ್ಜ  ಶುರು  ಮಾಡಿದ  ಮತ್ತ  ಮೊಮ್ಮಗ  ಮುಗಿಸಿದ  ಈ  ಗುಡಿ . ಮತ್ತ  ನಮಗೇನ  ಅಗೆದ  ಬ್ಯಾನಿ  ಅಂತೇನಿ . ಎಲ್  ನೋಡಿದಲ್ಲೆ  ಕಲೆ  ಎಲ್  ನೋಡಿದಲ್ಲೆ  ಸೌಂದರ್ಯ ... ಮನಷ್ಯನ  ಕುವತ್ತು  ಪರಾಕಾಷ್ಥಾ  ಮುಟ್ಟೆದ  ಅಂದ್ರ  ತಪ್ಪಾಗಂಗಿಲ್ಲರಿ . ಅದರಾಗ  ಚೆನ್ನಕೇಶವನ  ಮುರ್ತಿರೆ  ಅಗಧಿ  ಛಂದ  ಅದ ... ನನಗ  ಅಂತು  ಅವನ  ಮುಖಾನ  ನೋಡ್ಕೊತ್  ಕುತ್ತ್  ಬಿಡ ಬೇಕು  ಅಂತ  ಅನಸ್ಲಿಕತ್ತಿತ್ತು . ಏನ್  ಕಳಾ ಏನ್  ತೇಜಸ್ಸು  ಆಹಾ .

ಗುಡಿ   ಆವರಣದಾಗ  ಒಂದೊಂದು  ಮುರ್ತಿಗುನು  ಒಂದೊಂದು  ಕಥಿ  ಅವ . ಒಂದೊಂದು  ಖಂಬ ಕ್ಕೂ  ಒಂದೊಂದು  ಕಥಿ  ಅವ ... ಅಲ್ಲೇ  ಇರು  ಒಂದೊಂದು  ಕಲ್ಲಿಗೂ  ವಿಶಾಲವಾದ  ಕಥಿ  ಅವ  ರೀ . ಅದನ್ನೆಲ್ಲಾ  ನೋಡಿ  ನಮ್ಮ  ಇದ್ದ  ಬಿದ್ದ  ಹುಚ್ಚತನ  ಎಲ್ಲಾ  ಸುಟ್ಟ  ಬೂದಿ  ಆಗ್ತಾವ್  ನೋಡ್ರಿ . ಅದರಾಗ  ನನಗ  ವಿಷ್ನುನ  ಅವತಾರ  ಆದ  ಮೋಹಿನಿ  ಮೂರ್ತಿ  ನೋಡಿ  ಹುಚ್  ಆಗ್  ಬಿಟ್ಟೆ  ನೋಡ್ರಿ . ಇನ್ನೆನ   ಕುನದಾ ಡಾವಾ ಇದ್ದೆ  ನಾನು  ಬಹಳ  ಮಂದಿ  ಇದ್ರೂ  ಅಂತ  ಸುಮ್ನ  ಆದೆ . ಆಲ್  ರೀ  ಮೋಹಿನಿ  ಎದ್ದ  ಬಂಧಂಗ  ಅದ . ವಿಶಾಲ  ಹಣೆ , ಉದ್ದ  ಮೂಗು , ಛಂದ  ಕಣ್ಣು , ಅಗದಿ ನಾಜೂಕಾದ  ಹಾವ  ಭಾವ ... ಪುರಾಣ  ಒಳಗ  ವಿಷ್ಣು  ಮೋಹಿನಿ  ರೂಪ  ಧರಿಸಿದ  ಮ್ಯಾಲೆ  ಎಲ್ಲಾ ಮಂದಿ ಹುಚ್ಚರಾಗಿ  ಬಿಟ್ರು  ಅಂತ  ಕಥಿ  ಅದ ... ಅದ  ಖರೆ  ಇರ್ಬೇಕು  ನೋಡ್ರಿ .

ಸಂಜಿ  ನಾನು  ಗುಡಿ  ಆವರಣದಾಗ ಸುಮ್ನ  ತೊಡಿ  ಹಾಕಿ  ಕೂತಿದ್ದೆ ... ತಂಪಾದ  ಗಾಳಿ , ಎತ್ತ  ಕಣ್ಣು  ಹಾಯ್ಸಿದರು   ಸೌಂದರ್ಯ, ಕವಿತೆ ... ಜೀವನದಾಗ  ಏನ್  ಸಿಗ್ಬೇಕೋ  ಎಲ್ಲಾ  ಸಿಕ್ಕಂಗಾತು ನೋಡ್ರಿ  ಆ  ಕ್ಷಣದಾಗ. ಖರೆ  ಅದ - ಜೀವನದಾಗ  ಅತಿ  ಆನಂದ  ಕೊಡೊ  ವಸ್ತು  ಎಲ್ಲಾ  ಪುಕಟ್  ಸಿಗತಾವ. ನಮ್ಮ  ಸಮಜದಾಗ  ಇರೋ  ವ್ಯಶಮ್ಯ, ಇರ್ಷೆ , ಹೊಡೆದಾಟ -ಬಡಿದಾಟ , ಅಹಂಭಾವ , ಗುದ್ದಾಟ  ಎಲ್ಲಾ  ಕ್ಷುಲ್ಲಕ್  ಅವ  ಅಂತ  ಅನಿಸ್ಬಿಡ್ತಾವ  ನೋಡ್ರಿ . ಹಿಂತ  ಆನಂದ  ನಮಗೆಲ್ಲರಿಗೂ  ಯಾವತ್ತಿಗೂ  ಇರಲಿ.

No comments:

Post a Comment